Narayan Seva Sansthan ಇದರ “The Smart Village”(ದ ಸ್ಮಾರ್ಟ್ ವಿಲೇಜ್) ರಾಜಸ್ಥಾನದ ಅತ್ಯಂತ ಪ್ರಸಿದ್ಧ ಸರೋವರಗಳ ನಗರದ ಹತ್ತಿರ ಇರುವ ಒಂದು ಚಿಕ್ಕ ಹಳ್ಳಿಯಲ್ಲಿದೆ. ದೈಹಿಕವಾಗಿ ದುರ್ಬಲವಾಗಿರುವ ಸಾವಿರಾರು ಜನರಿಗೆ ಇಲ್ಲಿ ಹೊಸ ಬಾಳನ್ನು ಕೊಡಲಾಗುತ್ತದೆ. ವಿಶೇಷ ಸೇವೆಗಾಗಿ ಪದ್ಮಶ್ರೀ ಪಡೆದ ಕೈಲಾಶ್ ಅಗರ್ವಾಲ್ ‘ಮಾನವ’ ಸ್ಥಾಪಿಸಿದ, ವಿಭಿನ್ನವಾಗಿ ಸಾಮರ್ಥ್ಯ ಹೊಂದಿರುವವರು(ವಿಕಲಚೇತನರು) ಆವರಣದಿಂದ ಹೊರಬಂದಾಗ ತಮ್ಮ ಕಾಲುಗಳ ಮೇಲೆ ನಿಂತು ಜೀವನೋಪಾಯವನ್ನು ಗಳಿಸಲು ಪ್ರಾರಂಭಿಸಬಹುದು ಎಂದು ಖಚಿತಪಡಿಸಿಕೊಳ್ಳುವುದು ಈ ಸಂಸ್ಥೆಯ ಏಕೈಕ ಉದ್ದೇಶವಾಗಿದೆ.
ಅವರ ಚಿಕಿತ್ಸೆಯ ಸಮಯದಲ್ಲಿ, ಅವರು ನ್ಯೂನತೆ ಸರಿಪಡಿಸುವ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಪಡೆಯುವುದು ಮಾತ್ರವಲ್ಲ, ಅವರು ಸ್ವಾವಲಂಬಿಗಳಾಗುವುದನ್ನು ಖಚಿತಪಡಿಸಿಕೊಳ್ಳಲು ಕಂಪ್ಯೂಟರ್ ಮತ್ತು ಮೊಬೈಲ್ಗಳನ್ನು ಸರಿಪಡಿಸಲು ಅಥವಾ ಹೊಲಿಗೆ ಕಲೆಯನ್ನು ಕಲಿಯಲು ತರಬೇತಿ ನೀಡಲಾಗುತ್ತದೆ. ಕಾಲಾಂತರದಲ್ಲಿ, ಈ ಸಂಸ್ಥೆಯು ಬೆಳೆದಿದೆ ಮತ್ತು ಈಗ ಪೋಲಿಯೊ ಮತ್ತು ಸೆರೆಬ್ರಲ್ ಪಾಲ್ಸಿಯ 50-60ಕ್ಕೂ ಹೆಚ್ಚು ಸರಿಪಡಿಸುವ ಶಸ್ತ್ರಚಿಕಿತ್ಸೆಗಳು ಪ್ರತಿದಿನವೂ ಆಗುವ ವಿಶ್ವದ ಕೆಲವು ಕೇಂದ್ರಗಳಲ್ಲಿ ಇದು ಒಂದಾಗಿದೆ.
ಇದು ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಅವರ ಸಂಬಂಧಿಕರ ಅವಶ್ಯಕತೆಗಳನ್ನು ಸಹ ನೋಡಿಕೊಳ್ಳುತ್ತದೆ. ಅವರು ಉದಯಪುರವನ್ನು ತಲುಪಿದ ನಂತರ, ರೋಗಿಗಳು ಮತ್ತು ಅವರ ಜೊತೆಗಿರುವವರು ಚಿಕಿತ್ಸೆಗಾಗಿ ಸಂಸ್ಥೆಯಲ್ಲಿರುವವರೆಗೆ ಎಲ್ಲಾ ವೆಚ್ಚಗಳನ್ನು ಸಂಸ್ಥೆಯಿಂದ ಭರಿಸಲಾಗುತ್ತದೆ.
ನಾರಾಯಣ ಸೇವಾ ಸಂಸ್ಥಾನವು ತನ್ನ ಆವರಣದಲ್ಲಿ ಉಚಿತ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.
ವಿಕಲಚೇತನರಿಗೆ ಉತ್ತಮ ಜಗತ್ತನ್ನು ನಿರ್ಮಿಸುವುದು ಯಾವಾಗಲೂ ನಮ್ಮ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಗುರಿಯಾಗಿದೆ. ಈ ಆವರಣ ಜೀವಂತ ರೂಪದಲ್ಲಿ ಆ ಗುರಿಯ ಸಣ್ಣ ಪ್ರತಿಬಿಂಬವಾಗಿದೆ.