ಭಾರತದ ಚಾರಿಟೇಬಲ್ ಸಂಸ್ಥೆಯಾದ Narayan Seva Sansthan ‘ವರ್ಲ್ಡ್ ಆಫ್ ಹ್ಯುಮಾನಿಟಿ’ (WOH) ಕೇಂದ್ರವನ್ನು ಒಂದು ವಿಶಿಷ್ಟ ಕ್ರಮವಾಗಿ ಘೋಷಿಸಿದೆ. ಪ್ರತಿಯೊಬ್ಬ ಮನುಷ್ಯನನ್ನು ಅವರ ಸಾಮರ್ಥ್ಯ, ಜಾತಿ, ಮತ ಅಥವಾ ಧರ್ಮವನ್ನು ಲೆಕ್ಕಿಸದೆ ಸ್ವೀಕರಿಸುವ ಮತ್ತು ಸಶಕ್ತರನ್ನಾಗಿಸುವ ಸ್ಥಳ.
ಭಾರತದಲ್ಲಿ Narayan Seva Sansthan ಮತ್ತು ಪ್ರಪಂಚದಾದ್ಯಂತದ ಅದರ ಶಾಖೆಗಳ ಸ್ಥಾಪನೆಯು ಜನರು ಒಗ್ಗೂಡಿ ವರ್ಲ್ಡ್ ಆಫ್ ಹ್ಯುಮಾನಟಿ (ಮಾನವೀಯತೆಯ ಪ್ರಪಂಚ) ಕೇಂದ್ರವನ್ನು ನಿರ್ಮಿಸಲು ಕೊಡುಗೆ ನೀಡಲು ಸಹಾಯ ಮಾಡಿದೆ. ಈ ಕ್ರಮವು ಮೂರು ಸ್ತಂಭಗಳ ಮೇಲೆ ನಿಂತಿದೆ: ಗುಣಪಡಿಸುವುದು, ಉತ್ತಮಗೊಳಿಸುವುದು ಮತ್ತು ಸಶಕ್ತಗೊಳಿಸುವುದು.
“ವರ್ಲ್ಡ್ ಆಫ್ ಹ್ಯುಮಾನಟಿ” (ಮಾನವೀಯತೆಯ ಪ್ರಪಂಚ) ಭರವಸೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಅರ್ಥವನ್ನು ನೀಡುವ ಸ್ಥಳ. ಇದು ಎಲ್ಲರನ್ನೂ ಸ್ವೀಕರಿಸುವ ಒಂದು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಅಲ್ಲಿ ವಿವಿಧ ಸಮಸ್ಯೆಗಳಿರುವ ಜನರು ಉಚಿತವಾಗಿ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಸಮಾಜದ ಮುಖ್ಯ ಭಾಗವಾಗಬಹುದು.
ವರ್ಲ್ಡ್ ಆಫ್ ಹ್ಯುಮಾನಿಟಿ ಸೆಂಟರ್ ಉಚಿತ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣವನ್ನು ನೀಡುವುದರ ಜೊತೆಗೆ ಕೌಶಲ್ಯ ತರಬೇತಿಯನ್ನು ನೀಡಿ ವ್ಯಕ್ತಿಗಳನ್ನು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಸಹಾಯ ಮಾಡುತ್ತದೆ.
2011 ರ ಜನಗಣತಿಯಲ್ಲಿ ತೋರಿಸುವ ಪ್ರಕಾರ ಸವಲತ್ತುರಹಿತ ಕನಿಷ್ಠ ಸಂಖ್ಯೆಯವರ ಕುರಿತಾದ ಸಂಗತಿಗಳು ಭಾರತೀಯ ಜನಸಂಖ್ಯೆಯ ಗಮನಾರ್ಹ ಭಾಗವು ಒಂದಲ್ಲ ಒಂದು ಅಂಗವೈಕಲ್ಯದಿಂದ ಬಳಲುತ್ತಿದೆ ಎಂದು ಹೇಳುತ್ತವೆ:
ದೃಷ್ಟಿ ವಿಕಲಚೇತನರು
ಮಾತಿನ ಅಸಮರ್ಥತೆಗಳು
ಶ್ರವಣ ದೋಷಗಳು
ಚಲನೆಯ ವಿಕಲತೆಗಳು
2011 ರ ಜನಗಣತಿಯ ಈ ಸಂಗತಿಗಳನ್ನು ಪರಿಗಣಿಸಿದರೆ, ಸೂಪರ್-ಸ್ಪೆಷಾಲಿಟಿ ವರ್ಲ್ಡ್ ಆಫ್ ಹ್ಯುಮಾನಿಟಿ ಕೇಂದ್ರವು ಎಲ್ಲರಿಗೂ ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.