ಆಹಾರವು ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ, ಆದರೆ ದುರದೃಷ್ಟವಶಾತ್, ಕಡಿಮೆ ಸೌಲಭ್ಯಯಿರುವವರಿಗೆ ಆಹಾರದ ಕೊರತೆಯು ಇಂದು ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಇಂದಿಗೂ ಸಹ, ಸಮಾಜದ ಸೌಲಭ್ಯ ವಂಚಿತ ವರ್ಗಗಳ ಅನೇಕ ಜನರು ಒಂದು ಹೊತ್ತಿನ ಊಟವನ್ನು ಸಹ ಪಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಮಲಗಬೇಕಾದ ಪರಿಸ್ಥಿತಿ ಎದುರಾಗಿದೆ. ಭಾರತಕ್ಕೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ, ಬಡತನ ಮತ್ತು ಅಪೌಷ್ಟಿಕತೆ ಯಾವಾಗಲೂ ದೊಡ್ಡ ಸಮಸ್ಯೆಗಳಾಗಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕ ರೋಗವು ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಇನ್ನಷ್ಟು ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿತು, ಏಕೆಂದರೆ ಆ ಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡಲು ಸಣ್ಣಪುಟ್ಟ ಕೆಲಸಗಳೂ ಇರಲಿಲ್ಲ. Narayan Seva Sansthan ಯಾವಾಗಲೂ ಹಸಿದವರಿಗೆ ಆಹಾರ ನೀಡಲು ಸಮರ್ಪಿತವಾಗಿದೆ, ಆನ್ಲೈನ್ನಲ್ಲಿ ಅನ್ನದಾನ ದೇಣಿಗೆ ಮತ್ತು ಗರೀಬ್ ಪರಿವಾರ್ ಯೋಜನೆ ಮುಂತಾದ ಹಲವಾರು ಯಶಸ್ವಿ ಉಪಕ್ರಮಗಳು ಜಾರಿಯಲ್ಲಿವೆ, ಇದು ವಿಶೇಷವಾಗಿ ಕಷ್ಟದ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ. ಕೊರೊನಾವೈರಸ್ ಜಗತ್ತನ್ನು ಬಿರುಗಾಳಿಯಂತೆ ಆವರಿಸಿಕೊಂಡಾಗ, ನಾವು ನಮ್ಮ ಕ್ರಮವಾದ ಗರೀಬ್ ಪರಿವಾರ್ ಪಡಿತರ ಯೋಜನೆಯ ಮೂಲಕ, ಬಡವರಿಗೆ ಅನ್ನದಾನಕ್ಕಾಗಿ ಆನ್ಲೈನ್ ದೇಣಿಗೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆವು.
ಸಾಂಕ್ರಾಮಿಕ ರೋಗದ ಹೆದರಿಕೆ ಕಡಿಮೆಯಾಗಿ ಸಾಮಾನ್ಯ ಜೀವನ ಮತ್ತೆ ಆರಂಭಗೊಂಡಿದ್ದರೂ ಸಹ, Narayan Seva Sansthan ನಮ್ಮ ಗರೀಬ್ ಪರಿವಾರ್ ಪಡಿತರ ಯೋಜನೆ (GPRY) ಅಭಿಯಾನದ ಸಹಾಯದಿಂದ ತೀವ್ರ ಅಗತ್ಯವಿರುವ ಕುಟುಂಬಗಳನ್ನು ತಲುಪಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಈ ಅಭಿಯಾನದಡಿಯಲ್ಲಿ, ನಮ್ಮೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಬಡ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ನೀಡಿದ್ದೇವೆ. ಈ ಎಲ್ಲಾ ಕುಟುಂಬಗಳು ಈ ಪಡಿತರ ಚೀಟಿಗಳನ್ನು ಬಳಸಿಕೊಂಡು ಪ್ರತಿ ತಿಂಗಳ ಆರಂಭದಲ್ಲಿ ಉಚಿತ ಆಹಾರ ಪದಾರ್ಥಗಳು, ಪಡಿತರ ಮತ್ತು ದಿನಸಿ ಕಿಟ್ಗಳನ್ನು ಪಡೆಯಬಹುದು.
ಇಂದಿಗೂ ಸಹ, ಕಷ್ಟದ ಸಮಯದಲ್ಲಿ ನಿಮ್ಮ ಸಹಾಯದ ಅಗತ್ಯವಿರುವ ಅನೇಕ ಕುಟುಂಬಗಳಿವೆ ಮತ್ತು ಭಾರತದಾದ್ಯಂತ ಹೆಚ್ಚು ಅಂತಹ ಕುಟುಂಬಗಳಿಗೆ ಸಹಾಯ ಮಾಡಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. “ಅನ್ನದಾನ – ಮಹಾದಾನ”ದ ಪ್ರಮುಖ ಗುರಿಯೊಂದಿಗೆ ಗರೀಬ್ ಪರಿವಾರ್ ಪಡಿತರ ಯೋಜನೆಯು, ಬಡ ಕುಟುಂಬಗಳಿಗೆ ಗೋಧಿ ಹಿಟ್ಟು, ಬೇಳೆಕಾಳುಗಳು, ಅಡುಗೆ ಎಣ್ಣೆ, ಮಸಾಲೆಗಳು ಮುಂತಾದ ಆಹಾರ ಸಾಮಗ್ರಿಗಳನ್ನು ನೀಡುತ್ತದೆ. ಪ್ರತಿ ಕುಟುಂಬಕ್ಕೂ ಮಾಸಿಕ ಆಹಾರ ಸರಬರಾಜು ಮಾಡಲಾಗುತ್ತದೆ, ಇದರಿಂದಾಗಿ ಅವರ ಕುಟುಂಬದಲ್ಲಿ ಯಾರೂ ಹಸಿವಿನಿಂದ ಮಲಗಬೇಕಾಗಿಲ್ಲ. ಇಲ್ಲಿಯವರೆಗೆ, ನಾವು ದೇಶಾದ್ಯಂತ 46,235 ಪಡಿತರ ಕಿಟ್ಗಳನ್ನು ವಿತರಿಸಿದ್ದೇವೆ. “ನನ್ನ ಹತ್ತಿರ ಆಹಾರ ದಾನ” ಎಂದು ನೀವು ಆನ್ಲೈನ್ನಲ್ಲಿ ಹುಡುಕಬೇಕಾಗಿಲ್ಲ, ಅಲ್ಲಿ ನೀವು ಅಪರಿಚಿತ ಉಪಕ್ರಮದಲ್ಲಿ ನಿಮ್ಮ ನಂಬಿಕೆಯನ್ನು ಇಡಬೇಕಾಗಬಹುದು, ಏಕೆಂದರೆ Narayana Seva Sansthana ನಿಮಗೆ ಊಟವನ್ನು ದಾನ ಮಾಡುವುದನ್ನು ಅಥವಾ ಆನ್ಲೈನ್ ಅನ್ನದಾನ ದಾನವನ್ನು ಮಾಡುವುದನ್ನು ಅತ್ಯಂತ ಸರಳಗೊಳಿಸಿದೆ, ಅದು ಸರಿಯಾದ ಫಲಾನುಭವಿಗಳನ್ನು ತಲುಪುತ್ತದೆ ಎಂದು ನೀವು ನಂಬಬಹುದು. ಊಟಕ್ಕೆ ದೇಣಿಗೆ ನೀಡುವುದು ಅಥವಾ ಬಡವರು ಮತ್ತು ಸೂರಿಲ್ಲದವರಿಗಾಗಿ Narayana Seva Sansthanaದೊಂದಿಗೆ ಗರೀಬ್ ಪರಿವಾರ್ ಯೋಜನೆಯನ್ನು ಬೆಂಬಲಿಸುವುದು ಸಮಾಜಕ್ಕೆ ನೀವು ಮಾಡಬಹುದಾದ ಅತ್ಯಂತ ಉದಾತ್ತ ಕೆಲಸಗಳಲ್ಲಿ ಒಂದಾಗಿದೆ.
ನಿಮ್ಮ 2000 ರೂ.ಗಳ ಸಣ್ಣ ದೇಣಿಗೆಯು ಒಂದು ಕುಟುಂಬಕ್ಕೆ ಒಂದು ತಿಂಗಳು ಪೂರ್ತಿ ಆಹಾರವನ್ನು ನೀಡಬಹುದು ಮತ್ತು ಈ ಜಗತ್ತಿನಲ್ಲಿ ಅವರು ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಸಮಾಜಕ್ಕೆ ಉತ್ತಮ ಪರಿಣಾಮ ಬೀರಲು ಆನ್ಲೈನ್ನಲ್ಲಿ ಅನ್ನದಾನ ದೇಣಿಗೆ ಅಥವಾ NSSನಿಂದ ಗರೀಬ್ ಪರಿವಾರ್ ಯೋಜನೆಗೆ ಸಣ್ಣ ಮೊತ್ತವನ್ನು ದೇಣಿಗೆ ನೀಡಿ.