ಅಪಘಾತಗಳು ಅನಿರೀಕ್ಷಿತ ಮತ್ತು ಅವು ಜೀವನವನ್ನು ತೀವ್ರವಾಗಿ ಬದಲಾಯಿಸಬಹುದು. ಒಬ್ಬ ವ್ಯಕ್ತಿಯು ಅಪಘಾತದಲ್ಲಿ ಕೈ-ಕಾಲನ್ನು(ಗಳನ್ನು) ಕಳೆದುಕೊಂಡಾಗ, ಅವರ ಇಡೀ ಜೀವನವು ತಲೆಕೆಳಗಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಜನರು ತಮ್ಮ ಜೀವನವು ನಿಂತುಹೋಗುತ್ತದೆ ಎಂದು ಭಾವಿಸುತ್ತಾರೆ ಮತ್ತು ಭರವಸೆಯನ್ನು ಕಳೆದುಕೊಳ್ಳುತ್ತಾರೆ. Narayan ಕೃತಕ ಕೈ-ಕಾಲುಗಳ ಸಹಾಯದಿಂದ ಅವರ ಪರಿಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸಬಹುದು. ಆದರೆ ಪ್ರತಿಯೊಬ್ಬರೂ ಭಾರತದಲ್ಲಿ ಪ್ರಾಸ್ಥೆಟಿಕ್ ಕಾಲು ಅಥವಾ ಕೈ ವೆಚ್ಚವನ್ನು ಭರಿಸಲಾರರು. ಹಲವಾರು ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳು ಮತ್ತು ಅಂಗಚ್ಛೇದನದಿಂದ ಬದುಕುಳಿದವರು ಇದ್ದಾರೆ, ಹೆಚ್ಚಾಗಿ ಅನುಕೂಲಗಳು, ಪ್ರವೇಶ ಅಥವಾ ಹಣದ ಕೊರತೆಯಿಂದಾಗಿ ಅವರು ತಮ್ಮ ಜೀವನವನ್ನು ನಡೆಸಲು ಸಹಾಯ ಮಾಡುವ ಚಲನಶೀಲತೆ ಸಾಧನಗಳನ್ನು ಪಡೆಯಲು ಕಷ್ಟಪಡುತ್ತಾರೆ. ಅಗತ್ಯವಿರುವವರಿಗೆ ತಮ್ಮ ಚಲನಶೀಲತೆಯನ್ನು ಮರಳಿ ಪಡೆಯಲು ಅಗತ್ಯವಿರುವ ಸಂಪನ್ಮೂಲಗಳೊಂದಿಗೆ ಮತ್ತು ಸಾಮಾನ್ಯ ಹಾಗೂ ತೃಪ್ತಿಕರ ಜೀವನವನ್ನು ನಡೆಸುವ ವಿಶ್ವಾಸವನ್ನು ಒದಗಿಸಲು ಮೀಸಲಾಗಿರುವ Narayan Seva Sansthan, ಉಚಿತ-ವೆಚ್ಚದ ಕೃತಕ ಅಂಗಗಳಾದ ಪ್ರಾಸ್ಥೆಟಿಕ್ ಕಾಲುಗಳು ಮತ್ತು ಚಲನಶೀಲತೆ ಸಾಧನಗಳಾದ ಕ್ಯಾಲಿಪರ್ಗಳು, ಗಾಲಿಕುರ್ಚಿಗಳು ಮತ್ತು ಇನ್ನಷ್ಟು ವಿತರಿಸುತ್ತದೆ.
Narayan Seva Sansthan ಮಾನವೀಯತೆಯ ಜಗತ್ತಿನಲ್ಲಿ(ವರ್ಲ್ಡ್ ಆಫ್ ಹ್ಯುಮಾನಿಟಿ) ಕೃತಕ ಕೈ-ಕಾಲುಗಳಿಗಾಗಿ ಭಾರತದ ಮೊದಲ ಆಧುನೀಕೃತ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿತು. ಅಲ್ಲಿ ಸಮಾಜದ ಹಿಂದುಳಿದ ವಿಭಾಗಗಳಿಂದ ವಿಶೇಷ ಸಾಮರ್ಥ್ಯವುಳ್ಳ ಜನರು ಸರಿಪಡಿಸುವ ಶಸ್ತ್ರಚಿಕಿತ್ಸೆಗಳು ಮತ್ತು ಪುನರ್ವಸತಿಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು. ಮಾನವೀಯತೆಯ ಪ್ರಪಂಚದ(ವರ್ಲ್ಡ್ ಆಫ್ ಹ್ಯುಮಾನಿಟಿ) ಮೂಲಕ ಮತ್ತು ನಾವು ಆಯೋಜಿಸುವ ಹಲವಾರು ಶಿಬಿರಗಳು ಮತ್ತು ಉಪಕ್ರಮಗಳ ಮೂಲಕ, ಅಂತಹ ಬೆಂಬಲದ ಅಗತ್ಯವಿರುವವರಿಗೆ Narayan ಕೃತಕ ಕೈ-ಕಾಲುಗಳನ್ನು ನಾವು ಉಚಿತವಾಗಿ ವಿತರಿಸುತ್ತೇವೆ. ನಮ್ಮ ವಿಶೇಷ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ತಜ್ಞರ ತಂಡವು ಎಚ್ಚರಿಕೆಯಿಂದ ಅಳತೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಮ್ಮ ಉತ್ಪಾದನಾ ಕೇಂದ್ರದಲ್ಲಿ ತಯಾರಿಸಿದ ಎಲ್ಲಾ ಕೈ-ಕಾಲುಗಳ ಪರಿಪೂರ್ಣ ಫಿಟ್ ಅನ್ನು ಖಚಿತಪಡಿಸಿಕೊಳ್ಳಲು, ಫಲಾನುಭವಿಗಳ ನಿಖರವಾದ ಅಳತೆಗಳ ಪ್ರಕಾರ ಕಸ್ಟಮೈಸ್ ಮಾಡಲಾಗಿವೆಯೆ ಎಂದು ಖಚಿತಪಡಿಸುತ್ತದೆ. ಭಾರತದ ಅತ್ಯುತ್ತಮ ಕೃತಕ ಕೈ-ಕಾಲುಗಳನ್ನು ನಮ್ಮ ಹೆಚ್ಚು ಸುಧಾರಿತ ಕಾರ್ಯಾಗಾರಗಳಲ್ಲಿ, ಪ್ರಾಸ್ಥೆಟಿಕ್ಸ್ ಹಾಗೂ ಆರ್ಥೋಟಿಕ್ಸ್ ನ ನುರಿತ ತಂಡವು ನಿರ್ಮಿಸಿದೆ. ಕೃತಕ ತೋಳು ಅಥವಾ ಪ್ರಾಸ್ಥೆಟಿಕ್ ಕಾಲನ್ನು ಸ್ವೀಕರಿಸುವ ಫಲಾನುಭವಿಗಳಿಗೆ, ಅವರ ಹೊಸ ಕೈ-ಕಾಲು(ಗಳು) ಮತ್ತು ಅವುಗಳ ಕ್ರಿಯಾತ್ಮಕತೆಗೆ ಒಗ್ಗಿಕೊಳ್ಳಲು ಅಗತ್ಯವಿರುವ ಎಲ್ಲಾ ಸಹಾಯ ಮತ್ತು ನೆರವನ್ನು ಸಹ ಒದಗಿಸಲಾಗುತ್ತದೆ ಎಂದು ನಾವು ಖಚಿತಪಡಿಸುತ್ತೇವೆ. ಅವರ ಹೊಸ ಕೃತಕ ಪ್ರಾಸ್ಥೆಟಿಕ್ ಕಾಲನ್ನು ಸುಲಭವಾಗಿ ಬಳಸುವುದಕ್ಕಾಗಿ ನಮ್ಮ ತಜ್ಞರು ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ.
ನಿಮ್ಮ ಸಹಾಯದಿಂದ Narayan Seva Sansthan ನಿರ್ವಹಿಸಿದ ಸಾಧನೆಗಳನ್ನು ಕೆಳಗೆ ನೀಡಲಾಗಿದೆ. ನಿಮ್ಮ ದೇಣಿಗೆಗಳು ನಮ್ಮ ಕೃತಕ ಕೈ-ಕಾಲು ಕೇಂದ್ರಕ್ಕೆ ಉತ್ತಮ ಜೀವನಗಳಿಗೆ ಹೊಸ ಮಾರ್ಗವನ್ನು ಪ್ರಾರಂಭಿಸಲು ಸಹಾಯ ಮಾಡಿವೆ:
ಇಲ್ಲಿಯವರೆಗೆ, ನಮ್ಮ ಎನ್ಜಿಒ(NGO) 36,113 Narayan ಕೃತಕ ಕೈ-ಕಾಲುಗಳನ್ನು ಹಿಂದುಳಿದ ಅಂಗವಿಕಲರಿಗೆ ಸಂಪೂರ್ಣವಾಗಿ ಉಚಿತವಾಗಿ ಒದಗಿಸಿದೆ. ನಿಮ್ಮ ಸಣ್ಣ ಕೊಡುಗೆ ಇನ್ನೊಬ್ಬರ ಜೀವನವನ್ನು ಒಳ್ಳೆಯದಕ್ಕಾಗಿ ಬದಲಾಯಿಸಬಹುದು. ನೀವು ಸಮಾಜಕ್ಕೆ ಕೊಡುಗೆ ನೀಡುವ ಮಾರ್ಗವನ್ನು ಹುಡುಕುತ್ತಿದ್ದರೆ, ನಿಮ್ಮ ದೇಣಿಗೆ ದೀನದಲಿತ ಕುಟುಂಬಗಳು ಮತ್ತು ವ್ಯಕ್ತಿಗಳು ತಮ್ಮ ಜೀವನದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡಬಹುದು. ಭಾರತದಲ್ಲಿ ಒಂದು ಸಾಧಾರಣ ಪ್ರಾಸ್ಥೆಟಿಕ್ ಕಾಲಿನ ವೆಚ್ಚವೂ ಆರ್ಥಿಕವಾಗಿ ದುರ್ಬಲವಾದ ವಿಭಾಗಗಳ ಜನರಿಗೆ ಹೆಚ್ಚು ಎನಿಸಬಹುದು. ಆದ್ದರಿಂದ, ನೀವೂ ಸಹ ಒಂದು ವ್ಯತ್ಯಾಸವನ್ನು ಮಾಡಲು ಮತ್ತು ನಮ್ಮ ಸಮಾಜವನ್ನು ಉತ್ತಮವಾಗಿ ಪರಿವರ್ತಿಸಲು ನಮ್ಮ ಚಳುವಳಿಯ ಒಂದು ಭಾಗವಾಗಬಹುದು.