ಅಂಗವಿಕಲ ವ್ಯಕ್ತಿಗೆ ದೇಣಿಗೆ - ಕಾರ್ಯಾಚರಣೆಗಾಗಿ NGO ಗೆ ದೇಣಿಗೆ ನೀಡಿ | ನಾರಾಯಣ ಸೇವಾ ಸಂಸ್ಥಾನ
  • +91-7023509999
  • +91-294 66 22 222
  • info@narayanseva.org
Critical Disease

ನೀವು ಅಂಗವೈಕಲ್ಯವನ್ನು

ಹೊಂದಿದ್ದರೆ, ಜನರು
ನಿಮ್ಮ ಸಾಮರ್ಥ್ಯವನ್ನು
ಕುಗ್ಗಿಸಲು ಬಿಡಬೇಡಿ

ಗಂಭೀರ ರೋಗ
X
Amount = INR
ಅವರಿಗೆ ನಿಮ್ಮ ಸಹಾಯ ಬೇಕು!

ತುರ್ತಾಗಿ ನಿಮ್ಮ ಸಹಾಯ ಪಡೆಯಬೇಕಾದ ಗಂಭೀರ ರೋಗದ ರೋಗಿಗಳು

ಚಾಟ್ ಪ್ರಾರಂಭಿಸಿ
ಗಂಭೀರ ರೋಗ

ಒಂದು ಕಾರಣಕ್ಕಾಗಿ ದಾನ ಮಾಡಿ ಮತ್ತು ಅಗತ್ಯವಿರುವವರಿಗೆ ಭರವಸೆಯ ಒಂದು ಕಿರಣವನ್ನು ಒದಗಿಸಿ

ನೀವು ಒಂದು ಒಳ್ಳೆಯ ಕಾರಣಕ್ಕಾಗಿ ದಾನ ಮಾಡಿದಾಗ ಅಥವಾ ಅಂಗವಿಕಲ ಜನರ ದೇಣಿಗೆ ನೀಡಿದಾಗ, ನೀವು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಉನ್ನತೀಕರಿಸುತ್ತೀರಿ. Narayan Seva Sansthan 1985 ರಲ್ಲಿ ತನ್ನ ಅಡಿಪಾಯವನ್ನು ಹಾಕಿತು ಮತ್ತು ಅಂದಿನಿಂದ, ಸಮಾಜದ ದೀನದಲಿತ ವಿಭಾಗಗಳಿಂದ ಬಂದ ಜನರಿಗಾಗಿ ಅಂಗವಿಕಲ ಜನರ ದೇಣಿಗೆಯನ್ನು ಸಂಗ್ರಹಿಸುವ ಮೂಲಕ ನಾವು “ಕಷ್ಟಪಡುತ್ತಿರುವ ಮಾನವೀಯತೆಯ ಸೇವೆ”ಯ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಭಾರತವು 1.3 ಶತಕೋಟಿಗೂ ಹೆಚ್ಚು ಜನರ ರಾಷ್ಟ್ರವಾಗಿದೆ, ಮತ್ತು ಅವರಲ್ಲಿ ಸುಮಾರು 80 ಮಿಲಿಯನ್ ಜನರು ಇನ್ನೂ ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ. ತಮ್ಮ ಜೀವನವನ್ನು ನಡೆಸಲು ಅನೇಕರಿಗೆ ಜೀವನದಲ್ಲಿ ಅವಶ್ಯಕತೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಕೈಗೆಟುಕುವ ವೈದ್ಯಕೀಯ ಸೌಲಭ್ಯಗಳನ್ನು ಸಹ ಅವರು ಹೊಂದಿಲ್ಲ. Narayan Seva Sansthan ಒಂದು ಸರ್ಕಾರೇತರ ಸಂಘಟನೆಯಾಗಿದ್ದು, ಅದು ಸಮಾಜದ ಸುಧಾರಣೆಗೆ ಮೀಸಲಾಗಿದೆ, ಹಾಗೂ ಅಗತ್ಯವಿರುವವರನ್ನು ಉನ್ನತಿಗೇರಿಸಲು ಹಲವಾರು ಉಪಕ್ರಮಗಳನ್ನು ಅದು ಹೊಂದಿದೆ. ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ, ನಾವು ದಿವ್ಯಾಂಗರಿಗಾಗಿ ದೇಣಿಗೆ ಸಂಗ್ರಹಿಸುತ್ತಿದ್ದೇವೆ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಉತ್ತಮ ಯೋಜಿತ ಮತ್ತು ಸಮಗ್ರ ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಮೂಲಕ, ಸರಿಪಡಿಸುವ ಶಸ್ತ್ರಚಿಕಿತ್ಸೆಗಳು, ಪುನರ್ವಸತಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಹೆಚ್ಚಿನದನ್ನು ನೀಡುವ ಮೂಲಕ ಇಂದಿನ ಜಗತ್ತಿನಲ್ಲಿ ಅವರಿಗೆ ಸಮಾನ ಸ್ಥಾನಮಾನವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಈ ಎಲ್ಲಾ ಸೇವೆಗಳನ್ನು ಅಗತ್ಯವಿರುವವರಿಗೆ ಸಂಪೂರ್ಣವಾಗಿ ಮುಕ್ತವಾಗಿ ನೀಡಲಾಗುತ್ತದೆ, ಏಕೆಂದರೆ ನಾವು ಪ್ರತಿದಿನವೂ ಸಮಾಜದ ಆರ್ಥಿಕವಾಗಿ ದುರ್ಬಲ ವಿಭಾಗಗಳಿಂದ ಬಂದ ವಿಭಿನ್ನ ಸಾಮರ್ಥ್ಯವುಳ್ಳ ವ್ಯಕ್ತಿಗಳಿಗಾಗಿ ಕೆಲಸ ಮಾಡುತ್ತೇವೆ, ಅವರ ಭರವಸೆಗಳು ಮತ್ತು ಕನಸುಗಳನ್ನು ಅರಿತುಕೊಳ್ಳಲು ಮತ್ತು ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡುತ್ತೇವೆ.

ಇಲ್ಲಿಯವರೆಗೆ, Narayan Seva Sansthan, ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳಿಗೆ ನಿಮ್ಮ ಸಕ್ರಿಯ ದೇಣಿಗೆಗಳ ಸಹಾಯದಿಂದ ಮತ್ತು ನಮ್ಮೊಂದಿಗೆ ಸಂಬಂಧಿಸಿದ ವೈದ್ಯರು ಮತ್ತು ಇತರ ವೃತ್ತಿಪರರ ನಿರಂತರ ಪ್ರಯತ್ನಗಳ ಸಹಾಯದಿಂದ, ಗಂಭೀರ ರೋಗಗಳಿಗೆ ಸರಿಪಡಿಸುವ ಚಿಕಿತ್ಸೆಗಳು ಮತ್ತು ಉಪಚಾರವನ್ನು ಒದಗಿಸುವ ಮೂಲಕ 4.3 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಸಹಾಯ ಮಾಡಿದೆ.

ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗೆ ದೇಣಿಗೆ ನೀಡಿ

Narayan Seva Sansthan ಇದರ ಪ್ರಮುಖ ಗುರಿಯು ಸಮಾಜದ ಮುಖ್ಯವಾಹಿನಿಯಲ್ಲಿ ವಿಶೇಷ ಸಾಮರ್ಥ್ಯವುಳ್ಳ ಜನರನ್ನು ಸಹ ಸ್ವೀಕರಿಸುವಂತಹ ಸ್ಥಿತಿಯನ್ನು ರಚಿಸುವುದು. ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳಿಗಾಗಿ ಅದನ್ನು ಮಾಡಲು ನಿಮ್ಮ ದೇಣಿಗೆಗಳು ನಮಗೆ ಶಕ್ತಿ ನೀಡುತ್ತವೆ.

ಸ್ಕೋಲಿಯೋಸಿಸ್, ಪೋಲಿಯೊ, ಬೆನ್ನುಮೂಳೆಯ ಪರಿಸ್ಥಿತಿಗಳು ಮುಂತಾದ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳು, ಅಂಗವಿಕಲ ವ್ಯಕ್ತಿಗೆ ನೀವು ದೇಣಿಗೆ ನೀಡಬಹುದಾದ ಕಾರಣಗಳಲ್ಲಿ ಸೇರಿವೆ, ಏಕೆಂದರೆ ಈ ಕಾಯಿಲೆಗಳಿಗೆ ಅನೇಕ ಜನರಿಗೆ ಕೈಗೆಟುಕದಂತಹ ದುಬಾರಿ ಚಿಕಿತ್ಸೆಗಳ ಅಗತ್ಯವಿರುತ್ತದೆ. Narayan Seva Sansthan ದಲ್ಲಿ ನಾವು ಅಂತಹ ಸರಿಪಡಿಸುವ ಶಸ್ತ್ರಚಿಕಿತ್ಸೆಗಳು ಮತ್ತು ಇತರ ರೀತಿಯ ಸಹಾಯವನ್ನು ಅಗತ್ಯವಿರುವವರಿಗೆ ಉಚಿತವಾಗಿ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನಮ್ಮ ನಿಧಿಸಂಗ್ರಹ ಅಭಿಯಾನಗಳ ಮೂಲಕ, ಅಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹಣವನ್ನು ಸಂಗ್ರಹಿಸುವಾಗ ನಾವು ಮಕ್ಕಳ ಚಿಕಿತ್ಸೆಗಳಿಗೆ ದೇಣಿಗೆ ಸ್ವೀಕರಿಸುತ್ತೇವೆ ಮತ್ತು ನಮ್ಮ ದಾನಿಗಳು ಮಾಡಿದ ಅಂಗವಿಕಲ ವ್ಯಕ್ತಿಗಳ ದೇಣಿಗೆಯನ್ನು ಈ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳುತ್ತೇವೆ. ಅಗತ್ಯವಿರುವವರಿಗೆ ಸಮಯೋಚಿತ ಸಹಾಯ ಮತ್ತು ನೆರವನ್ನು ನೀಡುವ ಗುರಿಯನ್ನು ಹೊಂದಿರುವ ಹಲವಾರು ಉಪಕ್ರಮಗಳಿಗಾಗಿ ಅಂಗವಿಕಲ ಜನರ ದೇಣಿಗೆಗಳನ್ನು ನಾವು ಸ್ವೀಕರಿಸುತ್ತೇವೆ. ತಮ್ಮ ಪಾತ್ರವನ್ನು ಮಾಡಲು ಸಿದ್ಧರಿರುವ ಜನರು ಮತ್ತು ನಮ್ಮ ಕಾರ್ಯಾಚರಣೆಯ ಭಾಗವಾಗಲು ಬಯಸುವವರು ವಿಶೇಷ ಸಾಮರ್ಥ್ಯವುಳ್ಳವರ ಶಸ್ತ್ರಚಿಕಿತ್ಸೆಗಾಗಿ ಎನ್‌ಜಿಒ(NGO)ಗೆ ದೇಣಿಗೆ ನೀಡಲು ಮುಕ್ತರಾಗಿರುತ್ತಾರೆ.

ನಮ್ಮ ನಿಧಿಸಂಗ್ರಹ ಉಪಕ್ರಮಗಳು

Narayan Seva Sansthan ಭಾರತದಾದ್ಯಂತ 480 ಶಾಖೆಗಳು ಮತ್ತು ವಿದೇಶದಲ್ಲಿ 49 ಶಾಖೆಗಳನ್ನು ಹೊಂದಿದೆ, ಅಲ್ಲಿಂದ ನಾವು ಪ್ರತಿದಿನ ಹಿಂದುಳಿದ ವಿಭಾಗಗಳಿಂದ ವಿಶೇಷ ಸಾಮರ್ಥ್ಯವುಳ್ಳ ಜನರನ್ನು, ಪುನರ್ವಸತಿ ಮಾಡಲು ಸಹಾಯ ಮಾಡಲು ಕೆಲಸ ಮಾಡುತ್ತೇವೆ. ಕಾರ್ಯಾಚರಣೆಯ ಧನಸಹಾಯಕ್ಕಾಗಿ ಎನ್‌ಜಿಒ(NGO)ಗೆ ದೇಣಿಗೆ ನೀಡುವ ಮೂಲಕ ಮತ್ತು ಸಮಾಜದ ದುರ್ಬಲ ವಿಭಾಗಗಳಿಂದ ಬಂಡ ವಿಶೇಷ ಸಾಮರ್ಥ್ಯವುಳ್ಳವರಿಗೆ ಸಹಾಯ ಮಾಡುವ ಮೂಲಕ ನೀವು ಅವರ ಭರವಸೆಯನ್ನು ಅರಿತುಕೊಳ್ಳುವ ಮೂಲಕ ಒಂದು ಕಾರಣಕ್ಕಾಗಿ ದಾನ ಮಾಡಬಹುದು ಮತ್ತು ನಿಮ್ಮ ಕೊಡಿಗೆಯನ್ನು ನೀಡಬಹುದು. ಕಾರ್ಯಾಚರಣೆಯ ಧನಸಹಾಯಕ್ಕಾಗಿ ನಿಮ್ಮ ದೇಣಿಗೆಯು, ನಿರ್ಗತಿಕ ಕುಟುಂಬಗಳಿಂದ ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ, ಅವರು ಎದುರಿಸುತ್ತಿರುವ ಸಂಕಟ ಮತ್ತು ಕಷ್ಟಗಳಿಂದ ಹೊರನಡೆಯಲು ಮತ್ತು ಸಾಮಾನ್ಯ ಜೀವನವನ್ನು ನಡೆಸಲು ಅವರಿಗೆ ಅನುವು ಮಾಡಿಕೊಡುತ್ತದೆ. Narayan Seva Sansthan ಗಂಭೀರ ಕಾಯಿಲೆಗಳಿಗೆ ಸರಿಪಡಿಸುವ ಶಸ್ತ್ರಚಿಕಿತ್ಸೆಗಳಿಗೆ ಸಹಾಯ ಮಾಡುವುದಲ್ಲದೆ, ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ಉದ್ಯೋಗವನ್ನು ಹುಡುಕುವಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ. ಅದರಿಂದ ಅವರೂ ಸಹ ಸ್ವಾವಲಂಬಿತರಾಗಬಹುದು ಮತ್ತು ಉತ್ತಮ ಜೀವನವನ್ನು ನಡೆಸಲು ಸಶಕ್ತರಾಗಬಹುದು. ಮಕ್ಕಳ ಮತ್ತು ವಿಶೇಷ ಸಾಮರ್ಥ್ಯವುಳ್ಳವರ ಶಸ್ತ್ರಚಿಕಿತ್ಸೆಗೆ ದೇಣಿಗೆ ನೀಡುವ ದಾನಿಗಳು ಒಂದು ಒಳ್ಳೆಯ ಕೆಲಸವನ್ನು ಮಾಡುವುದು ಮಾತ್ರವಲ್ಲದೆ ಅವರ ದೇಣಿಗೆಗಳು ಆದಾಯ ತೆರಿಗೆ ರಿಯಾಯಿತಿಗಳನ್ನು ಪಡೆಯಲು ಸೆಕ್ಷನ್ 80ಜಿ ಅಡಿಯಲ್ಲಿ ಕೂಡಾ ಬರುತ್ತವೆ.

ನಿಮ್ಮ ದೇಣಿಗೆಯು ಹೇಗೆ ಸಹಾಯ ಮಾಡಬಹುದು

ಸಮಾಜದ ಮುಖ್ಯವಾಹಿನಿಯಲ್ಲಿ ವಿಭಿನ್ನವಾಗಿ ಸಮರ್ಥರಾಗಿರುವವರು ತಮ್ಮ ಸ್ಥಾನವನ್ನು ಹೊಂದಿರುವ ಒಳಗೊಂಡ ಸಮಾಜವನ್ನು ರಚಿಸುವ ನಮ್ಮ ಧ್ಯೇಯದಲ್ಲಿ ನಮ್ಮೊಂದಿಗೆ ಸೇರಿರಿ. ದಿವ್ಯಾಂಗರಿಗೆ ಶಸ್ತ್ರಚಿಕಿತ್ಸೆಗೆ ಅಥವಾ ದೇಣಿಗೆಗಾಗಿ ಒಂದು ಸಣ್ಣ ದಾನ ಸಹ ಒಂದು ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು ಮತ್ತು ರೋಗವು ಮಾರಣಾಂತಿಕವಾಗುವುದಕ್ಕೆ ಮುಂಚಿತವಾಗಿ ಸರಿಯಾದ ಸಹಾಯವನ್ನು ನೀಡಬಹುದು. ಇಲ್ಲಿಯವರೆಗೆ, ನಮ್ಮ ಉದಾತ್ತ ಕಾರಣಕ್ಕಾಗಿ ನಾವು ಸ್ವೀಕರಿಸಿದ ದೇಣಿಗೆಗಳು 2,70,000 ಗಾಲಿಕುರ್ಚಿಗಳು, 2,90,000+ ಊರುಗೋಲುಗಳು, 2,60,000+ ಟ್ರೈಸಿಕಲ್‌ಗಳು ಮತ್ತು 1,70,000+ ಕಂಬಳಿಗಳನ್ನು ಅಗತ್ಯವಿರುವ ಮತ್ತು ಹಿಂದುಳಿದ ಜನರಲ್ಲಿ ವಿತರಿಸಲು ನಮಗೆ ಸಹಾಯ ಮಾಡಿವೆ. ನಮ್ಮ ಕೇಂದ್ರಗಳಲ್ಲಿ ವೈಯಕ್ತಿಕವಾಗಿ ನೀಡಿದ ದೇಣಿಗೆಗಳನ್ನು ಸ್ವೀಕರಿಸುವುದರ ಹೊರತಾಗಿ, ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ(UPI), ಆರ್‌ಟಿಜಿಎಸ್/ಎನ್‌ಇಎಫ್ ಟಿ(RTGS/NEFT) ಇತ್ಯಾದಿಗಳ ಮೂಲಕ ನಾವು ಆನ್‌ಲೈನ್‌ನಲ್ಲಿ ದೇಣಿಗೆಗಳನ್ನು ಸ್ವೀಕರಿಸುವುದರಿಂದ ನಮ್ಮ ನಿಧಿಸಂಗ್ರಹ ಅಭಿಯಾನಗಳು ಕೊಡುಗೆ ನೀಡಲು ಅನುಕೂಲಕರವಾಗಿವೆ ಎಂದು ನಾವು ಖಚಿತಪಡಿಸಿದ್ದೇವೆ. ಮೇಲೆ ಹೇಳಿದಂತೆ, ಎನ್‌ಜಿಒ(NGO) ನಿಧಿಗೆ ಶಸ್ತ್ರಚಿಕಿತ್ಸೆಗಾಗಿ ರೂ. 500 ಕ್ಕಿಂತ ಹೆಚ್ಚಿನ ದಾನಕ್ಕೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅಡಿಯಲ್ಲಿ, ತೆರಿಗೆ ವಿನಾಯಿತಿ ನೀಡಲಾಗುತ್ತದೆ.