ಮಕ್ಕಳು ನಮ್ಮ ಸಮಾಜದ ಭವಿಷ್ಯ ಮತ್ತು ನೀವು ಶಿಕ್ಷಣಕ್ಕಾಗಿ ದಾನ ಮಾಡುವಾಗ, ಮಕ್ಕಳು ಸರಿಯಾದ ಸಂಪನ್ಮೂಲಗಳು, ಮಾರ್ಗದರ್ಶನ ಮತ್ತು ಮಾನ್ಯತೆ ಪಡೆಯುವುದನ್ನು ಇದು ಖಾತ್ರಿಗೊಳಿಸುತ್ತದೆ ಮತ್ತು ಪ್ರತಿ ಮಗುವಿಗೆ ಅದರ ಪೂರ್ಣ ಸಾಮರ್ಥ್ಯವನ್ನು ತಲುಪಲು ಉತ್ತಮವಾಗಿ ಸಜ್ಜುಗೊಳಿಸುತ್ತದೆ. Narayan Seva Sansthan ದಲ್ಲಿ, ಅವರ ಕಲಿಕೆಗೆ ಸರಿಯಾದ ಅವಕಾಶಗಳನ್ನು ಒದಗಿಸಲಾದಾಗ ಪ್ರತಿ ಮಗು ಅಸಾಧಾರಣವಾಗಬಹುದು ಮತ್ತು ಅದ್ಭುತವಾದ ಎತ್ತರವನ್ನು ತಲುಪಬಹುದು ಎಂಬ ದೃಢವಾದ ನಂಬಿಕೆಯನ್ನು ನಾವು ಹೊಂದಿದ್ದೇವೆ.
ಇಂದಿಗೂ, ಶಿಕ್ಷಣ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದ ಸಾವಿರಾರು ಮಕ್ಕಳಿದ್ದಾರೆ. ಹಣಕಾಸು, ಭೌಗೋಳಿಕ, ಅಥವಾ ಸಾಮಾಜಿಕ ನಿರ್ಬಂಧಗಳಿಂದ ಬಂಧಿಸಲ್ಪಟ್ಟ ಈ ಮಕ್ಕಳಿಗೆ ಕಲಿಯುವ ಅವಕಾಶವನ್ನು ನಿರಾಕರಿಸಲಾಗಿದೆ. Narayan ಚಿಲ್ಡ್ರನ್ ಅಕಾಡೆಮಿ(ಮಕ್ಕಳ ಸಂಸ್ಥೆ)ಯಂತಹ ಶಿಕ್ಷಣ ಟ್ರಸ್ಟ್ಗೆ ಸಹಾಯ ಮಾಡುವುದರಿಂದ ಹಲವಾರು ಮಕ್ಕಳು ತಮ್ಮ ಕೌಶಲ್ಯಗಳನ್ನು ಗುರುತಿಸಲು ಮತ್ತು ಅಭಿವೃದ್ಧಿಪಡಿಸಲು, ಅವರ ಪೂರ್ಣ ಸಾಮರ್ಥ್ಯವನ್ನು ತಲುಪಲು ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಸದಸ್ಯರಾಗಲು ಸಹಾಯ ಮಾಡುತ್ತದೆ. ಅದಲ್ಲದೆ ಅವರ ಜೀವನವನ್ನು ಸಹ ಉತ್ತಮವಾಗಿ ಪರಿವರ್ತಿಸುತ್ತದೆ. ಅವರಿಗೆ ಬೇಕಾಗಿರುವುದು ಸರಿಯಾದ ಶಿಕ್ಷಣ. ಭಾರತದಲ್ಲಿನ ಎನ್ಜಿಒ(NGO)ಗಳಿಗೆ ಆಗಾಗ್ಗೆ ಅವರ ಉಪಕ್ರಮಗಳಿಗೆ ಬೆಂಬಲ ಬೇಕಾಗುತ್ತದೆ ಮತ್ತು ಶಿಕ್ಷಣ ಕಾರ್ಯಕ್ರಮಗಳಿಗೆ ನಿಮ್ಮ ದೇಣಿಗೆ ಬಹಳ ಸಹಾಯಕವಾಗಬಹುದು.
ಭಾರತದಲ್ಲಿ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿರುವ ಒಂದು ಎನ್ಜಿಒ(NGO) ಆಗಿ, ಮಕ್ಕಳ ಮೂಲವನ್ನು ಪರಿಗಣಿಸದೆ, ಅವರು ಶಾಲೆಗೆ ಹಾಜರಾಗಬಹುದು, ಮತ್ತು ಕಲಿಯಬಹುದು, ತಮ್ಮ ವಯಸ್ಸಿನ ಇತರ ಮಕ್ಕಳೊಂದಿಗೆ ಸಂವಹನ ಮಾಡಬಹುದು ಮತ್ತು ಆಡಬಹುದು ಎಂದು ನಾವು ಖಚಿತಪಡಿಸುತ್ತೇವೆ. ನಾವು ಶಿಕ್ಷಣ ಪ್ರಚಾರಕ್ಕಾಗಿ ಕೆಲಸ ಮಾಡುವ ಒಂದು ಎನ್ಜಿಒ(NGO) ಆಗಿದ್ದೇವೆ. ಭಾರತದಲ್ಲಿ ನಮ್ಮ ಶಿಕ್ಷಣ ಎನ್ಜಿಒ(NGO)ಗಳು ಮಕ್ಕಳಿಗೆ ತಮ್ಮ ಸಾಮರ್ಥ್ಯ ಮತ್ತು ಸೃಜನಶೀಲತೆಯನ್ನು ಅಭಿವೃದ್ಧಿಪಡಿಸುವ ಸಂಪನ್ಮೂಲಗಳನ್ನು ಮತ್ತು ಅರ್ಹ ಬೋಧಕರ ಮೇಲ್ವಿಚಾರಣೆಯನ್ನು ಒದಗಿಸುತ್ತವೆ. ಇದರಿಂದ ಅವರು ಮತ್ತು ಅವರ ಕುಟುಂಬಗಳು ಭವಿಷ್ಯದಲ್ಲಿ ಗೌರವಾನ್ವಿತ ಜೀವನವನ್ನು ಆನಂದಿಸಬಹುದು ಎಂದು ಖಚಿತಪಡಿಸುತ್ತವೆ.
Narayan Seva Sansthan ದ ಅಧ್ಯಕ್ಷರಾದ ಶ್ರೀ. ಪ್ರಶಾಂತ ಅಗರ್ವಾಲ್ ಅವರು, Narayan ಚಿಲ್ಡ್ರನ್ ಅಕಾಡೆಮಿ(ಮಕ್ಕಳ ಸಂಸ್ಥೆ)ಯ, ಇಂಗ್ಲೀಷ್-ಮಾಧ್ಯಮ ಸಹ-ಶೈಕ್ಷಣಿಕ ಶಾಲೆ ಮತ್ತು Narayan Seva Sansthan ದ ಒಂದು ಘಟಕವಾದ ಇದರ ಅಡಿಪಾಯವನ್ನು, ಜುಲೈ 31, 2015 ರಂದು, ಗುರು ಪೂರ್ಣಿಮೆಯ ಸಂದರ್ಭದಲ್ಲಿ ಲಿಯೋ ಕಾ ಗುಡಾ, ಬಾಡಿ, ಉದಯಪುರದಲ್ಲಿ ಹಾಕಿದರು. ಉಚಿತ ಊಟ, ಸಮವಸ್ತ್ರಗಳು, ಲೇಖನ ಸಾಮಗ್ರಿಗಳು, ಸಾಗಣೆ, ಮತ್ತು ಸಮಾಜದ ದೀನದಲಿತ ಹಿನ್ನೆಲೆ ವರ್ಗದ ಮಕ್ಕಳಿಗೆ ಆರೋಗ್ಯ ರಕ್ಷಣೆ ಸೇರಿದಂತೆ ಅಮೂಲ್ಯವಾದ ಶೈಕ್ಷಣಿಕ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುವ ಮೂಲಕ ಸಮಾಜಕ್ಕೆ ಉದ್ದೇಶಪೂರಕ ಕೊಡುಗೆ ನೀಡುವುದು ಅವರ ಉದ್ದೇಶವಾಗಿದೆ.
ಮಕ್ಕಳ ಶಿಕ್ಷಣಕ್ಕಾಗಿ ಈ ಎನ್ಜಿಒ(NGO) ಅಕಾಡೆಮಿಯಲ್ಲಿ, ಗೌರವಾನ್ವಿತ ಮತ್ತು ಸಾರ್ಥಕ ಜೀವನವನ್ನು ನಡೆಸಲು ಬಯಸುವ ಪ್ರತಿಯೊಬ್ಬರಿಗೂ ಶಿಕ್ಷಣವು ಅತ್ಯಗತ್ಯ ಎಂದು ನಾವು ನಂಬುತ್ತೇವೆ. ಈ ನಂಬಿಕೆಯು ನಮ್ಮನ್ನು ಭಾರತದ ಉನ್ನತ ಶಿಕ್ಷಣ ಆಧಾರಿತ ಎನ್ಜಿಒ(NGO)ಗಳಲ್ಲಿ ಒಂದನ್ನಾಗಿಸುತ್ತದೆ. ನೀವು ಶಿಕ್ಷಣಕ್ಕಾಗಿ ದಾನ ಮಾಡಿದಾಗ, ನಮ್ಮ ಛಾವಣಿಯ ಅಡಿಯಲ್ಲಿರುವ ಪ್ರತಿ ಮಗುವು ತನ್ನ ಪೂರ್ಣ ಸಾಮರ್ಥ್ಯವನ್ನು ಅನುಭವಿಸಲು ಮತ್ತು ತನ್ನ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ನೀವು ನಮಗೆ ಸಹಾಯ ಮಾಡುತ್ತೀರಿ. ಪ್ರತಿ ಮಗುವು, ಅವರ ಹಿನ್ನೆಲೆ ಅಥವಾ ಅವರಿಗೆ ನೀಡಲಾದ ಅವಕಾಶಗಳನ್ನು ಲೆಕ್ಕಿಸದೆ ತಮ್ಮದೇ ಆದ ರೀತಿಯಲ್ಲಿ ಅಸಾಧಾರಣವಾಗಿವೆ ಮತ್ತು ಅವರಿಗೆ ಕಲಿಯುವ ಅವಕಾಶವನ್ನು ಒದಗಿಸಿದರೆ ಮಾತ್ರ ಅವರು ಹೆಚ್ಚಿನ ಎತ್ತರವನ್ನು ತಲುಪಬಹುದು ಎಂಬ ದೃಢವಾದ ನಂಬಿಕೆ ನಮ್ಮಲ್ಲಿದೆ.
ಸಾವಿರಾರು ಮಕ್ಕಳಿಗೆ ಶಿಕ್ಷಣ, ಆಹಾರ, ಮತ್ತು ಆರೋಗ್ಯ ರಕ್ಷಣೆಯ ಅವಶ್ಯಕತೆಯಿದೆ. ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಇವೆಲ್ಲವೂ ಅವರಿಗೆ ಅವಶ್ಯಕವಾಗಿವೆ. ಶಿಕ್ಷಣಕ್ಕಾಗಿ ದೇಣಿಗೆಗಳು ಅವರ ಜೀವನವನ್ನು ನೀವು ಊಹಿಸಲೂ ಸಾಧ್ಯವಾಗದಂತಹ ವಿವಿಧ ರೀತಿಯಲ್ಲಿ ಬದಲಾಯಿಸಲು ಸಹಾಯ ಮಾಡುತ್ತವೆ. ಭಾರತದಲ್ಲಿ ಶಿಕ್ಷಣ ಆಧಾರಿತ ಎನ್ಜಿಒ(NGO)ಗಳ ನಿರಂತರ ಪ್ರಯತ್ನಗಳ ಹೊರತಾಗಿಯೂ, ಸರಿಯಾದ ಕಲಿಕೆಯ ಅವಕಾಶಗಳ ಕೊರತೆಯು ಭಾರತದಲ್ಲಿ ಇನ್ನೂ ಪ್ರಮುಖ ವಿಷಯವಾಗಿದೆ. ನೀವು ಭಾರತದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಬಹುದು ಮತ್ತು ಸಮಾಜದ ಸುಧಾರಣೆಗಾಗಿ ನಮ್ಮ ಪ್ರಯತ್ನಗಳಿಗೆ ಸೇರಬಹುದು.
ನಮ್ಮ ಶಿಕ್ಷಣ ಉಪಕ್ರಮಗಳಿಗಾಗಿ, ನಮ್ಮ ದಾನಿಗಳಿಂದ ಅವರ ದೇಣಿಗೆಗಳ ಮೂಲಕ ನಾವು ಪಡೆದ ಅಚಲವಾದ ಬೆಂಬಲ ಮತ್ತು ನಮ್ಮ ನಿರಂತರ ಪ್ರಯತ್ನಗಳು ಈ ವಿಷಯದಲ್ಲಿ ಸ್ಥಿರವಾದ ಪ್ರಗತಿ ಸಾಧಿಸಲು ಹಾಗೂ ಸಾವಿರಾರು ಮಕ್ಕಳ ಜೀವನವನ್ನು ಬದಲಾಯಿಸಲು ನಮಗೆ ಅನುವು ಮಾಡಿಕೊಟ್ಟಿವೆ.
Narayan ಚಿಲ್ಡ್ರನ್ ಅಕಾಡೆಮಿ(ಮಕ್ಕಳ ಸಂಸ್ಥೆ), ಪ್ರಸ್ತುತ 1834 ಮಕ್ಕಳ ನೆಲೆಯಾಗಿದೆ. ಇದು ಅನಾಥ ಮಕ್ಕಳು, ದೀನದಲಿತ ಮಕ್ಕಳು ಮತ್ತು ವಿಧವೆಯರ ಮಕ್ಕಳು ಉಚಿತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವ ಶಿಕ್ಷಣ ಟ್ರಸ್ಟ್ ಆಗಿದೆ.
ಮಕ್ಕಳ ಶಿಕ್ಷಣಕ್ಕಾಗಿ ದೇಣಿಗೆ ನೀಡಲು, ನೀವು ಈ ಕೆಳಗಿನ ವಿಧಾನಗಳ ಮೂಲಕ ನಮ್ಮನ್ನು ಸಂಪರ್ಕಿಸಬಹುದು.